Wednesday, December 7, 2011

ದಿವ್ಯ ಚೇತನ



ಕಲಿಯುಗದ ಬುದ್ಧ ನೀನು
ಅಹಿಂಸೆಯಿಂದಲೇ ಎಲ್ಲವನ್ನು
ಗೆದ್ದವನು ನೀನು


ಬ್ರಿಟೀಷರ ದಾಸ್ಯದ ಸಮಕೋಲೆಗಳಲ್ಲಿ
ಸುತ್ತುವರೆದಿದ್ದ ದಬ್ಬಾಳಿಕೆಯನು
ಶಾಂತಿಯಿಂದಲೇ ಹಿಮ್ಮೆಟಿದವನು ನೀನು
ಆದಶ೵ ಸ್ವಾತಂತ್ರ್ಯವೆಂಬ

ಕಿಚ್ಚನ್ನು ಎಲ್ಲರಲ್ಲೂ ಹೊತ್ತಿಸಿ


ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ

ಹಿಂದು, ಮುಸ್ಲಿಂ, ಕ್ರೈಸ್ತರೆಲ್ಲೆನೂ ಒಂದುಗೂಡಿಸಿ

ಶಾಂತಿಮಂತ್ರವ ಭೋಧಿಸಿದ ಮಹಾಭೋಧಿ ನೀನು

ವಿದೇಶಿ ವಸ್ತ್ರಗಳನೆಲ್ಲ ಸುಟ್ಟು
ನೀನಾಕಿದೆ ಖಾದಿಗೆ ಹುಟ್ಟು


ದಂಡಿಯಲಿ ಉಪ್ಪು ತಯಾರಿಸಿ

ಹೇಳಿಕೊಟ್ಟೆ ಎಲ್ಲರಿಗೂ ನಾವೆಂದು
ಗುಲಾಮರಲ್ಲ ಅವರಿಗೆ ಎಂದು

ನೀನೊಬ್ಬ ಮುಂದೆ-ಮುಂದೆ
ಸಾವಿರಾರು ಸೇನಾನಿಗಳು ನಿನ್ನ
ಹಿಂದೆ-ಹಿಂದೆ


ಭಾರತ ಬಿಟ್ಟು ತೊಲಗಿ ಎಂಬ
ಕೂಗಿಗೆ ನಡುಗಿತು ಬ್ರಿಟೀಷರ ಪಾಳ್ಯ
ಹೆದರಿ ಹೌಹಾರಿದರು ಈ ಮಹಾತ್ಮನ
ಮಹಾತ್ಮೆಗೆ, ಅವನ ಬೆನ್ನಿಂದೆ ಇದ್ದ
ಸಾವಿರಾರು ದೇಶಭಕ್ತರ ಕೂಗಿಗೆ


ಕೆಟ್ಟದನ್ನು ನೋಡದೆ, ಮಾಡದೇ ,ಕೇಳದೆ
ನೀನಿರಬೇಕೆಂದು ಭೋಧಿಸಿದೆ
ರಘುಪತಿ ರಾಘವರಾಜಾರಾಮ್

ಪತೀತ ಪಾವನ ಸೀತಾರಾಮ್
ಈಶ್ವರ ಅಲ್ಲಾ ತೇರೇ ನಾಮ್
ಸಬುಕೋ ಸನ್ನಮತಿ ದೇ ಭಗವಾನ್
ಎಂದು ಮನದಲ್ಲೇ ಪಠಿಸಿದೆ.



ನಿನ್ನ ಸಾರಥ್ಯದಲ್ಲಿ ದೊರಕಿತು ಸ್ವಾತಂತ್ರ್ಯ

ಮುಕ್ತಳಾದಳು ಭಾರತಮಾತೆ

ಧನ್ಯಳಾದಳು ನಿನ್ನಂತಹ ಮಗನನ್ನು ಪಡೆದು


ಅದೊಂದು ಘೋರ ಕರಾಳದಿನ

ನೀನು ರಕ್ತದ ಮಡುವುನಲಿ

ಒದ್ದಾಡಿ ಪ್ರಾಣಬಿಟ್ಟ ಕ್ಷಣ

ನಿನ್ನ ಬಾಯಿಂದ ಬಂದದ್ದು

ದಿವ್ಯ ಸಂಜೀನಿನಿ ಮಂತ್ರ




ಹೇ ರಾಮ್ ಹೇ ರಾಮ್ ಹೇ ರಾಮ















No comments: